
ಕೋಟ: ಪೂಜೆ ಪುನಸ್ಕಾರಕ್ಕೆ ದೇವಸ್ಥಾನಗಳು ಸೀಮಿತ ಗೊಳ್ಳದೆ ಸಾಧಕರನ್ನು ಗುರುತಿಸುವುದೂ ಸೇರಿದಂತೆ ಹತ್ತು ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಾರ್ಥದ ಧರ್ಮವಾಗಿದ್ದು, ಈ ದಿಸೆಯಲ್ಲಿ ಕೂಟ ಬ್ರಾಹ್ಮಣ ಪ್ರವರ್ಗದ ಆಡಳತೆಯ ಶ್ರೀ ಗುರು ನರಸಿಂಹ ದೇವಸ್ಥಾನವು ಮಾದರಿಯಾಗಿದೆಯೆಂದು ಮಂಗಳೂರು ಕೋಟೇಕಾರ್ ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯ ಶಂಕರ ಬೊಳ್ಳಾವ ನುಡಿದರು
ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದ ಅವರು ಕಾರ್ತಿಕ ದೀಫೋತ್ಸವದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಭಿಪ್ರಾಯಪಟ್ಟರು. ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಗುರು ಸ್ಮರಣೆ ಮಾಡಿದರು.
ವೇದಿಕೆಯಲ್ಲಿ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ , ದಿ.ಗಂಗಾಧರ ಐತಾಳ ಪತ್ನಿ ಶ್ರೀಮತಿ ಪಾರ್ವತಿ ಐತಾಳರಿಂದ ಸಂಪಾದಿತ ವಿಜ್ಞಾನ, ಗಣಿತ ಮತ್ತು ಖಗೋಳ ಮಾದರಿ ಎಂಬ ಪ್ರೌಢಶಾಲಾ ವಿದ್ಯಾರ್ಥಿಗಳ ಮಾಹಿತಿ ಆಕರ ಕೃತಿಯನ್ನು ಬಿಡುಗಡೆಗೊಳಿಸಿದರು.
ಸಾಂಸ್ಕೃತಿಕ ಚಿಂತಕ ಸದಾರಾಮ ಹೇರ್ಳೆ ಮಣಿಪಾಲ, ಕೃತಿ ಮತ್ತು ಕೃತಿಕಾರರ ಕುರಿತು ಮಾತನಾಡಿದರು.
ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆಯವರು ಉಪಸ್ಥಿತರಿದ್ದರು. ದೇವಳದ ಆಡಳಿತ ಮಂಡಳಿಯ ಸದಸ್ಯ ಪಿ.ಸದಾಶಿವ ಐತಾಳ ಸ್ವಾಗತಿಸಿದರು. ಮೀಯಪದವು ಎಂ.ಆರ್ .ಶ್ರೀಧರ ರಾಯರು ಅತಿಥಿಗಳನ್ನು ಗೌರವಿಸಿದರು.
ಏ.ವಿ.ಶ್ರೀಧರ ಕಾರಂತ ಧನ್ಯವಾದ ಸಮರ್ಪಣೆಗೈದರು. ಸಭಾ ಕಾರ್ಯಕ್ರಮವನ್ನು ಸುಜಾತಾ ಬಾಯರಿ ಮತ್ತು ಜ್ಯೋತಿ ನಿರೂಪಿಸಿದರು. ನಿಗಮಾಗಮ ವೇದ ಪಾಠಶಾಲೆಯ ವಿದ್ಯಾರ್ಥಿಗಳ ವೇದ ಘೋಷದಿಂದ ಪ್ರಾರಂಭವಾದ ಅಚ್ಚು ಕಟ್ಟಾದ ಸಮಾರಂಭವು ಐಕ್ಯ ಮಂತ್ರದೊAದಿಗೆ ವಿಧ್ಯುಕ್ತವಾಗಿ ಮುಕ್ತಾಯಗೊಂಡಿತು.
ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದ ಅವರು ಕಾರ್ತಿಕ ದೀಫೋತ್ಸವದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ದೇವಳದ ಅಧ್ಯಕ್ಷ ಡಾ.ಕೆ.ಎಸ್. ಕಾರಂತ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆಯವರು ಉಪಸ್ಥಿತರಿದ್ದರು.
Leave a Reply