Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರ ಮಾರಿ ಜಾತ್ರೆ: ಫೆ. 20-21 ರಂದು ನಡೆಯಲಿದೆ

ಕುಂದಾಪುರ :  ಇಲ್ಲಿನ ಖಾರ್ವಿಕೇರಿಯಲ್ಲಿರುವ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಮಾರಿ ಜಾತ್ರೆಯು ಫೆ. 20 ಮತ್ತು 21 ರಂದು ಜರಗಲಿರುವುದು.

ಫೆ. 20 ರಂದು ರಾತ್ರಿ 8 ಗಂಟೆಗೆ ಅಮ್ಮನವರಿಗೆ ತುಲಾಭಾರ ಸೇವೆ, ಮಡಿಲು ತುಂಬುವುದು. ರಾತ್ರಿ 9.30 ಕ್ಕೆ ಸೇವಾ ಕರ್ತರಿಂದ “ಅನ್ನ ಸಂತರ್ಪಣೆ” ಕಾರ್ಯಕ್ರಮ ನಡೆಯಲಿರುವುದು.

ಫೆ.21 ರಂದು ಬೆಳಿಗ್ಗೆ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಬಳಿಕ ದೋಸೆ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *