• Fri. May 17th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸರಕಾರದ ಗ್ಯಾರಂಟಿ ಯೋಜನೆಗಳೆ ಕಾಂಗ್ರೆಸ್‌ಗೆ ಮತಗಳಾಗಿ ಪರಿವರ್ತನೆಗೊಳ್ಳಲಿದೆ :  ಶಂಕರ್ ಎ ಕುಂದರ್

ByKiran Poojary

Apr 5, 2024

ಕೋಟ: ಲೋಕಸಭಾ ಚುನಾವಣೆಯ ಹಿನ್ನಲ್ಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ  ಕ್ಷೇತ್ರದ ವ್ಯಾಪ್ತಿಯ ಕುಂದಾಪುರ ವಿಧಾನಸಭಾ  ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ  ಸಾಲಿಗ್ರಾಮ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿ ಇಂದಿರಾ ಭವನನಲ್ಲಿ ಶುಕ್ರವಾರ ಜರಗಿತು.

ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್ ರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರಕಾರದ ಗ್ಯಾರಂಟಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಭೆಯಲ್ಲಿ ಪುನರುಚ್ಚರಿಸಿದರಲ್ಲದೆ ಹಿಂದಿನ ಕಾಂಗ್ರಸ್ ಅವಧಿಯನ್ನು ಮತ್ತೆ ಪುನರಾವರ್ತನೆಗೋಳ್ಳಲಿದ್ದು ಜಯಪ್ರಕಾಶ್ ಹೆಗ್ಡೆಯವರು ಅತಿ ಹೆಚ್ಚು ಅಂತರದಲ್ಲಿ ಜಯಶಾಲಿಯಾಗಲಿದ್ದಾರೆ, ಈ ದಿಸೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಗ್ಯಾರಂಟಿ ಅನುಷ್ಠಾನವನ್ನು ಮನೆ ಮನೆಗೆ ತಿಳಿಹೇಳುವ ಕಾರ್ಯ ಆಗಲಿ ಎಂದು ಕರೆ ಇತ್ತರು.

ಸಭೆಯಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ, ಬೈಂದೂರು ಗೋಪಾಲ ಪೂಜಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ  ಶ್ರೀನಿವಾಸ್ ಅಮೀನ್, ಮಹಿಳಾ ಘಟಕದ ರೇಖಾ ಪಿ ಸುವರ್ಣ, ಮುಖಂಡರುಗಳಾದ  ಪ್ರಕಾಶ್‌ಚಂದ್ರ ಶೆಟ್ಟಿ ಕಂಬದ ಕೋಣೆ,  ತಿಮ್ಮ ಪೂಜಾರಿ, ರವೀಂದ್ರ ಕಾಮತ್ ಗುಂಡ್ಮಿ, ಗಣೇಶ್ ಬಡಹೋಳಿ, ಪುನೀತ್ ಪೂಜಾರಿ,  ಜಹಿರಾ ಎಂ.ಎಸ್. ಸಂಜೀವ, ರಾಜೇಶ್ ಕೆ ನೆಲ್ಲಿಬೆಟ್ಟು, ದಿನೇಶ್ ಬಂಗೇರ, ಗೋಪಾಲ್ ಬಂಗೇರ, ಗಣೇಶ್ ಕೆ ನೆಲ್ಲಿಬೆಟ್ಟು, ಸುಜನ್ ಶೆಟ್ಟಿ, ನಾಗೇಂದ್ರ ಪುತ್ರನ್, ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ,ಪಂಚಾಯತ್ ಸದ್ಯಸರು,  ಕೆ ಜಯಪ್ರಕಾಶ್ ಹೆಗ್ಡೆ ಅವರ ಹಿತೈಷಿಗಳು, ಘಟಕದ ಅಧ್ಯಕ್ಷರು ಸದ್ಯಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆಯ ಹಿನ್ನಲ್ಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ  ಕ್ಷೇತ್ರದ ವ್ಯಾಪ್ತಿಯ ಕುಂದಾಪುರ ವಿಧಾನಸಭಾ  ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ  ಸಾಲಿಗ್ರಾಮ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಮಾತನಾಡಿದರು.

Leave a Reply

Your email address will not be published. Required fields are marked *