• Thu. May 16th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಕಾಂಗ್ರೆಸ್ ಪಕ್ಷದ ಸದ್ಯಸ ಹಾಗೂ ವಿರೋಧ ಪಕ್ಷದ ನಾಯಕರಾದ  ಶ್ರೀನಿವಾಸ ಅಮೀನ್‌ರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಅಪಪ್ರಚಾರದ ಕುರಿತು ಪೋಲೀಸ್ ಠಾಣೆಗೆ ದೂರು ದಾಖಲು

ByKiran Poojary

Apr 29, 2024

ಲೋಕಸಭಾ ಚುನಾವಣೆಯ ಮುನ್ನಾದಿನ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ  ಒಂದು ವಿಡಿಯೋ ಹಾಗೂ ಪೋಸ್ಟರ್ ಭಾರೀ ವೈರಲ್ ಆಗಿತ್ತು. ಈ ವೈರಲ್ ಆದ ವೀಡಿಯೋದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್  ಕಾಂಗ್ರೆಸ್ ಪಕ್ಷದ ಸದ್ಯಸ ಹಾಗೂ ವಿರುದ್ಧ ಪಕ್ಷದ ನಾಯಕರಾದ ಶ್ರೀನಿವಾಸ ಅಮೀನ್‌ರವರು ಮೇಲ್ವರ್ಗದವರಿಗೆ ಬುದ್ದಿ ಕಲಿಸೋಣ ಎಂಬರ್ಥದ ಮಾತುಗಳನ್ನು ಆಡಿದ್ದಾರೆ ಹಾಗೂ ಅದನ್ನ ಪೋಸ್ಟರ್ ತರ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿತ್ತು. ಈ ಕುರಿತು ಇಂದು ಶ್ರಿನಿವಾಸ ಅಮೀನ್‌ರವರು ಉಡುಪಿ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಡಿಯೋ/ಪೋಸ್ಟರ್‌ಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಯಾರಲ್ಲ ವೈಯಕ್ತಿಕವಾಗಿ ಹಾಗೂ ಫೇಸ್ಬುಕ್, ವಾಟ್ಸಪ್ ಗ್ರೂಪ್ ಗಳಲ್ಲಿ  ಹಂಚಿಕೊಂಡವರ ವಿವರಗಳೂ ಲಭ್ಯವಿದ್ದು ಅವರ ಮೇಲೂ ತನಿಖೆಗೆ ಆದೇಶಿಸಿ ಇಂದು ದೂರು ದಾಖಲಿಸಲಾಗಿದೆ. ಸುಳ್ಳುಸುದ್ದಿ ಹಂಚುವ ಕುರಿತು ಸರಕಾರ ಗಂಭೀರವಾಗಿದ್ದು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವ ವಿಶ್ವಾಸವಿದೆ.

Leave a Reply

Your email address will not be published. Required fields are marked *