• Thu. May 16th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕರಂಬಳ್ಳಿ : ಮಲ್ಲಿಗೆ  ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ , ಸನ್ಮಾನ

ByKiran Poojary

Apr 29, 2024

ಉಡುಪಿ  ಜಿಲ್ಲಾ  ಕೃಷಿಕ  ಸಂಘ , ಕರಂಬಳ್ಳಿ ವಲಯ , ಕರಂಬಳ್ಳಿ  ದೇವಸ್ಥಾನ  ಆಡಳಿತ  ಮಂಡಳಿ  ಹಾಗೂ  ಕರಂಬಳ್ಳಿ  ವಲಯ  ಬ್ರಾಹ್ಮಣ  ಸಮಿತಿಯ  ಜಂಟಿ  ಆಶ್ರಯದಲ್ಲಿ ಮಲ್ಲಿಗೆ ಕೃಷಿ  ಬಗ್ಗೆ  ಪ್ರಾತ್ಯಾಕ್ಷಿಕೆ , ತೋಟಗಾರಿಕಾ ಹಣ್ಣು ಬೆಳೆಸುವ  ಬಗ್ಗೆ  ಮಾಹಿತಿ , ತಾರಸಿ ಕೃಷಿ  ಬಗ್ಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು .

ಸಂಪನ್ಮೂಲ ವ್ಯಕ್ತಿಗಳಾಗಿ ರಾಮಕೃಷ್ಣ  ಶರ್ಮ , ಬಂಟಕಲ್ಲು. (ಮಲ್ಲಿಗೆ  ಕೃಷಿ ) ಕುದಿ ಶ್ರೀನಿವಾಸ  ಭಟ್  (ಹಣ್ಣ್ಣಿನ  ಬೆಳೆ ) ಹಾಗು ಕುಮಾರಸ್ವಾಮಿ  ಉಡುಪ  (ತಾರಸಿ  ಕೃಷಿ) ಅವರು ವೈಜ್ಞಾನಿಕ ಪದ್ದತಿಯಲ್ಲಿ ಕೃಷಿ ಲಾಭದಾಯಕ  ಹೇಗೆ  ಎಂಬ  ಬಗ್ಗೆ  ಸಮಗ್ರ  ಮಾಹಿತಿ  ನೀಡಿದರು .ಇದೇ ಸಂದರ್ಭದಲ್ಲಿ ನುರಿತ  ಹಿರಿಯ ಅನುಭವಿ ಕೃಷಿಕ ಶ್ರೀ  ವಿಠ್ಠಲದಾಸ  ಉಪಾಧ್ಯ ಪಾಡಿಗಾರ್  ಇವರನ್ನು  ಸನ್ಮಾನಿಸಲಾಯಿತು .

ಅರ್ಚಕ  ದಿವಾಕರ  ಐತಾಳ್ ದೀಪ  ಬೆಳಗಿಸಿ , ಕೃಷಿಕ  ಸಂಘದ  ಅಧ್ಯಕ್ಷ ಶ್ರೀಪತಿ ಭಟ್ ಕರಂಬಳ್ಳಿ ಸ್ವಾಗತಿಸಿದರು .
ಶ್ರೀನಿವಾಸ  ಬಲ್ಲಾಳ್ ಸಭೆಯ  ಅಧ್ಯಕ್ಷತೆ  ವಹಿಸಿದ್ದರು .
ಕರಂಬಳ್ಳಿ  ಬ್ರಾಹ್ಮಣ  ಸಮಿತಿಯ  ಅಧ್ಯಕ್ಷ  ಕೀಳಂಜೆ  ಶ್ರೀಕೃಷ್ಣರಾಜ್  ಭಟ್ , ಪೆರಂಪಲ್ಲಿ ಕೃಷಿಕ  ಸಂಘದ  ಅಧ್ಯಕ್ಷ ರವೀಂದ್ರ  ಪೂಜಾರಿ , ಹರಿಕೃಷ್ಣ ಶಿವತ್ತಾಯ  ಪೆರಂಪಳ್ಳಿ ಮುಖ್ಯ  ಅತಿಥಿ ಗಳಾಗಿ ಆಗಮಿಸಿದ್ದರು .
ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ  ನಿರ್ವಹಿಸಿ ನಾಗರಾಜ್  ಭಟ್  ವಂದಿಸಿದರು . ರಂಗನಾಥ  ಸಾಮಗ  ಸಹಕರಿಸಿದರು .

Leave a Reply

Your email address will not be published. Required fields are marked *