• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಡಿ ಕನ್ಯಾಣ – ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವಿಕೆ

ByKiran Poojary

May 25, 2023

ಕೋಟ: ಕೋಡಿ ಗ್ರಾಮ  ಪಂಚಾಯತ್  ಮಹಾತ್ಮ ಗಾಂಧೀ  ರಾಷ್ಟ್ರೀಯ ಉದ್ಯೋಗ  ಖಾತ್ರಿ  ಯೋಜನೆಯಡಿ  ಕೋಡಿ ಕನ್ಯಾಣದ  ನಾರಾಯಣ  ನಾವಡರ ಮನೆ ಬಳಿಯಿರುವ   ಸರಕಾರಿ ಕೆರೆ ಹೂಳೆತ್ತುವ  ಕಾಮಗಾರಿಯನ್ನು ನಡೆಯುತ್ತಿದ್ದು ಕಾಮಗಾರಿ ನಡೆಯುವ ಸ್ಥಳಕ್ಕೆ ಬ್ರಹ್ಮಾವರ ತಾಲೂಕು  ಪಂಚಾಯತ್  ಕಾರ್ಯನಿರ್ವಹಣಾಧಿಕಾರಿ  ಎಚ್.ವಿ.ಇಬ್ರಾಹಿಂಪುರ್ ಭೇಟಿ ನೀಡಿ  ಪರಿಶೀಲಿಸಿದರು.

ಈಗಾಗಲೇ  ಕೋಡಿ ಗ್ರಾಮ ಪಂಚಾಯತ್‍ನಿಂದ  ಮಹಾತ್ಮ  ಗಾಂಧೀ  ಉದ್ಯೋಗ  ಖಾತ್ರಿ ಯೋಜನೆಯಡಿ  2 ಕೆರೆಗಳ ಹೂಳೆತ್ತುವ  ಕಾಮಗಾರಿಯನ್ನು ನಡೆಯುತ್ತಿದೆ.  ಕಾಮಗಾರಿಯಲ್ಲಿ  ಸುಮಾರು 32 ಫಲಾನುಭವಿಗಳು  ಹೂಳೆತ್ತುವ  ಕಾಮಗಾರಿಯಲ್ಲಿ  ತಮ್ಮನ್ನು  ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ  ಗ್ರಾಮ  ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್,  ಪಂಚಾಯತ್  ಅಧ್ಯಕ್ಷ ಪ್ರಭಾಕರ  ಮೆಂಡನ್ ಹಾಗೂ  ಸಿಬ್ಬಂದಿ ವರ್ಗ  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *