ಕುಂದಾಪುರ : ಅಂತರಾಷ್ಟ್ರೀಯ ಪವರ್ ಲಿಪ್ಟರ್ ಕುಂದಾಪುರದ ಸತೀಶ್ ಖಾರ್ವಿಯವರು ಆಂಧ್ರಪ್ರದೇಶ ವಿಶಾಖಪಟ್ಟಣದ ರಾಜಂನಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎಂ –1 ವಿಭಾಗದ 66 -ಕೆಜಿ ಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು, 4ನೇ ಕ್ಲಾಸಿಕ್ ರಾಷ್ಟ್ರೀಯ ಡೆಡ್ಲಿ ಲಿಫ್ಟ್ ನಲ್ಲಿ ನೂತನ ದಾಖಲೆ ಮಾಡಿರುವುದನ್ನು ಗುರುತಿಸಿ, ಕರ್ನಾಟಕ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬೆಂಗಳೂರಿನಲ್ಲಿ ಸನ್ಮಾನಿಸಿ, ಬುದ್ಧನ ವಿಗ್ರಹವನ್ನು ನೀಡಿ ಅಭಿನಂದಿಸಿದರು. ಸತೀಶ್ ಖಾರ್ವಿಯವರಿಂದ ರಾಜ್ಯಕ್ಕೆ ಇನ್ನಷ್ಟು ಕೀರ್ತಿ ತರುವಂತೆ ಹುರಿದುಂಬಿಸಿದರು.