• Mon. May 20th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

“ಹುಟ್ಟೂರ ನಮ್ಮೂರ ಸಂಮಾನ”

ByKiran Poojary

Sep 27, 2023

ದುಬೈಯ ಯು.ಎ.ಇ. ಬ್ರಾಹ್ಮಣ ಸಮಾಜ ಇವರು ಹಮ್ಮಿಕೊಂಡ “ಹುಟ್ಟೂರ ನಮ್ಮೂರ ಸಂಮಾನ” ಸಮಾರಂಭದಲ್ಲಿ ಉಡುಪಿಯ ನಿಕಟ ಪೂರ್ವ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಭಾಗವಹಿಸಿ ಶುಭ ಹಾರೈಸಿದರು.

ಶಾಸಕರಾಗಿದ್ದಾಗ ಕೇವಲ ಸರ್ಕಾರದ ಯೋಜನೆಗಳಿಗೆ ಸೀಮಿತವಾಗಿರದೆ ಕೇದಾರೋತ್ಥಾನ ಟ್ರಸ್ಟ್ ಮೂಲಕ ಹಡಿಲು ಭೂಮಿ ಕೃಷಿ ಆಂದೋಲನ, ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಯಕ್ಷಗಾನ ತರಬೇತಿ, ಆಸರೆ ಟ್ರಸ್ಟ್ ಮೂಲಕ ಬಡವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಹಾಗೂ ಸಹಾಯ ಹಸ್ತ ಹೀಗೆ ನಿರಂತರವಾಗಿ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಿದ್ದ ರಘುಪತಿ ಭಟ್ ಅವರ ಸಾಮಾಜಿಕ ಕಳಕಳಿ, ಸೇವಾ ಮನೋಭಾವನೆಯನ್ನು ಮೆಚ್ಚಿ ದುಬೈಯ ಯು.ಎ.ಇ. ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *