• Sun. May 12th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟ ವಿವೇಕ ವಿದ್ಯಾ ಸಂಸ್ಥೆಯ ಅಮೃತ ಮಹೋತ್ಸವ ತರಗತಿ ಕೋಣೆಗಳ ಉದ್ಘಾಟನೆ

ByKiran Poojary

Oct 31, 2023

ಕೋಟ : ಇಲ್ಲಿನ ಕೋಟ ವಿವೇಕ ವಿದ್ಯಾ ಸಂಸ್ಥೆಯ ಅಮೃತ ಮಹೋತ್ಸವ ಪ್ರಯುಕ್ತ ತರಗತಿ ಕೋಣೆಗಳ ಉದ್ಘಾಟನೆ ಅ.30 ರಂದು ಕೋಟ ವಿವೇಕ ವಿದ್ಯಾ ಸಂಸ್ಥೆಯ ಎಂ.ಜೆ.ಎಂ. ಸಭಾಂಗಣದಲ್ಲಿ ಜರಗಿತು.

ಕೆನರಾ ಬ್ಯಾಂಕ್, ಮಣಿಪಾಲ ವೃತ್ತ ಕಚೇರಿ ಮಹಾಪ್ರಬಂಧಕ ಎಂ.ಜಿ.ಪಂಡಿತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೂರಾರು ಶಿಕ್ಷಣ ಸಂಸ್ಥೆ ಹುಟ್ಟಿಕೊಳ್ಳುತ್ತದೆ. ಆದರೆ ಕೆಲವೇ ಕೆಲವು ಸಂಸ್ಥೆಗಳು ತನ್ನ ವಿಶೇಷತೆ ಮೂಲಕ ಮಾಸದ ಹೆಜ್ಜೆಗುರುತು ದಾಖಲಿಸುತ್ತದೆ. ಅಂತಹ ಸಂಸ್ಥೆಗಳಲ್ಲಿ ವಿವೇಕ ವಿದ್ಯಾಸಂಸ್ಥೆ ಕೂಡ ಒಂದು ಎಂದರು. ವಿವೇಕ ವಿವೇಕಿಗಳು,ಪ್ರತಿಭಾವಂತರನ್ನು ಹುಟ್ಟು ಹಾಕುವ ಸಂಸ್ಥೆಯಾಗಿದೆ ಎಂದರು.

ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾಪ್ರಬಂಧಕ ಎಂ. ಜಿ. ಪಂಡಿತ್ ಅಮೃತ ಮಹೋತ್ಸವದ ಕರಪತ್ರ ಬಿಡುಗಡೆಗೊಳಿಸಿದರು.
ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಮಾತನಾಡಿದರು. ವಿದ್ಯಾಸಂಘದ ಸಹಕಾರ್ಯದರ್ಶಿ ಮಂಜುನಾಥ ಉಪಾಧ್ಯ ಪ್ರಾಸ್ತಾವಿಕ ಮಾತನಾಡಿದರು.
ವಿದ್ಯಾಸಂಘದ ಅಧ್ಯಕ್ಷ ಸಿ.ಎ. ಪಿ. ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾಸಂಘದ ಕಾರ್ಯದರ್ಶಿ ಎಂ. ರಾಮದೇವ ಐತಾಳ, ಪ್ರಾಂಶುಪಾಲ, ಕೆ. ಜಗದೀಶ ನಾವಡ, ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇಂಪಿ ರಮಾನಂದ ಭಟ್, ಖಜಾಂಚಿ ವೆಲೇರಿಯನ್ ಮೆನೇಜಸ್, ಮುಖ್ಯ ಶಿಕ್ಷಕರಾದ ಜಗದೀಶ್ ಹೊಳ್ಳ, ವೆಂಕಟೇಶ ಉಡುಪ, ಭಾಸ್ಕರ ಆಚಾರ್ಯ ಇದ್ದರು. ಉಪನ್ಯಾಸಕ ಅಮಿತ್ ನಿರೂಪಿಸಿ, ಪ್ರಾಂಶುಪಾಲ ಕೆ. ಜಗದೀಶ ನಾವಡ ವಂದಿಸಿದರು.ಹಳೆ ವಿದ್ಯಾರ್ಥಿಗಳಿಂದ ಕುಂದಾಪ್ರ ಕನ್ನಡ ಹರಟೆ ಕುಂದಾದ್ಯಂತ ಜರಗಿತು.

ಇಲ್ಲಿನ ಕೋಟ ವಿವೇಕ ವಿದ್ಯಾ ಸಂಸ್ಥೆಯ ಅಮೃತ ಮಹೋತ್ಸವ ಪ್ರಯುಕ್ತ ತರಗತಿ ಕೋಣೆಗಳ ಉದ್ಘಾಟನೆ ಅ.30 ರಂದು ಕೋಟ ವಿವೇಕ ವಿದ್ಯಾ ಸಂಸ್ಥೆಯ ಎಂ.ಜೆ.ಎಂ. ಸಭಾಂಗಣದಲ್ಲಿ ಜರಗಿತು.

Leave a Reply

Your email address will not be published. Required fields are marked *