• Sun. May 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಶ್ರೀ ನಂದಿಕೇಶ್ವರ ಗೆಳೆಯರ ಬಳಗ 12ನೇ ವರ್ಷದ ಯಕ್ಷಸಂಭ್ರಮ

ByKiran Poojary

Dec 20, 2023

ಕೋಟ: ಶ್ರೀ ನಂದಿಕೇಶ್ವರ ಗೆಳೆಯರ ಬಳಗ ಕೋಟತಟ್ಟು ಪಡುಕರೆ ಇದರ 12ನೇ ವರ್ಷದ ಯಕ್ಷಸಂಭ್ರಮ ಡಿ.16ರಂದು ಶನಿವಾರ ಕೋಟತಟ್ಟು ಪಡುಕರೆಯ ನಂದಿಕೇಶ್ವರ ದೇವಸ್ಥಾನ ವಠಾರದಲ್ಲಿ ಸಂಪನ್ನಗೊAಡಿತು.
ಶ್ರೀ ನಂದಿಕೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಭಾಸ್ಕರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಸಭಾಕಾರ್ಯಕ್ರಮವನ್ನು ಮಾಜಿ ಕೋಟತಟ್ಟು ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ ಉದ್ಘಾಟಿಸಿದರು. 25ನೇ ವರ್ಷದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆಗೈದ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಮತ್ತು ಮತ್ಸೊ್ಯದ್ಯಮಿ ಮಹಾಬಲ ತಿಂಗಳಾಯ ಪಡುಕರೆ ಇವರನ್ನು ಸನ್ಮಾನಿಸಲಾಯಿತು. ಸ್ಥಳೀಯ ನಂದಿಕೇಶ್ವರ ದೇವಸ್ಥಾನ ಅರ್ಚಕ ನಾಗರಾಜ ಕಾರಂತ ಮತ್ತು ಭಗವತ್ ಭಜನಾ ಮಂದಿರದ ಅರ್ಚಕ ಬಾಬು ಪೂಜಾರಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಗಳಿಗೆ ಸ್ಥಳ ಖರೀದಿಗೆ ನಡೆಸಿದ ಲಕ್ಕಿಡಿಪ್‌ನ್ನು ಈ ಸಂದರ್ಭದಲ್ಲಿ ಡ್ರಾಗೊಳಿಸಲಾಯಿತು. ಲಕ್ಷ್ಮಣ್ ಪೂಜಾರಿ ಬೆಂಗಳೂರು ಸ್ವಾಗತಿಸಿದರು . ಶಿವರಾಮ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಭಂಡಾರಿ ಪಡುಕರೆ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.

ಶ್ರೀ ನಂದಿಕೇಶ್ವರ ಗೆಳೆಯರ ಬಳಗ ಕೋಟತಟ್ಟು ಪಡುಕರೆ ಇದರ 12ನೇ ವರ್ಷದ ಯಕ್ಷಸಂಭ್ರಮವನ್ನು ಮಾಜಿ ಕೋಟತಟ್ಟು ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ ಉದ್ಘಾಟಿಸಿದರು. ನಂದಿಕೇಶ್ವರ ದೇವಸ್ಥಾನ ಅರ್ಚಕ ನಾಗರಾಜ ಕಾರಂತ ಮತ್ತು ಭಗವತ್ ಭಜನಾ ಮಂದಿರದ ಅರ್ಚಕ ಬಾಬು ಪೂಜಾರಿ ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *