• Sun. May 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಶಾಕಲ ಋಕ್ಸಂಹಿತಾ ಯಾಗಕ್ಕೆ ಚಾಲನೆ ಮತ್ತು ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ.

ByKiran Poojary

Dec 31, 2023

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ 31ರ ರವಿವಾರದಿಂದ ಮೊದಲ್ಗೊಂಡು ಜ.07ರ ರವಿವಾರದ ವರೆಗೆ ಲೋಕಕಲ್ಯಾಣಾರ್ಥವಾಗಿ ಶಾಕಲ ಋಕ್ಸಂಹಿತಾ ಯಾಗವನ್ನು ಹಮ್ಮಿಕೊಂಡಿದ್ದು, ಡಿ.30ರ ಪೂರ್ವಭಾವಿ ಸಿದ್ಧತೆಯ ಭಾಗವಾಗಿ ಸಾಮೂಹಿಕ ಫಲ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ನೇತೃತ್ವದಲ್ಲಿ ತಂತ್ರಿ ಕೃಷ್ಣ ಸೋಮಯಾಜಿ ಪ್ರಾರ್ಥನಾವಿಧಿಯನ್ನು ನೆರವೇರಿಸಿದರು.

ದೇವಳದ ಆಡಳಿತ ಮಂಡಳಿಯ ಪೂರ್ವ ಅಧ್ಯಕ್ಷ ಜಗದೀಶ ಕಾರಂತ, ಗ್ರಾಮ ಮೊಕ್ತೇಸರರಾದ ಕೋಡಿ ನಾಗೇಂದ್ರ ನಾವಡ, ಮಹಾಬಲ ಹೇರ್ಳೆ, ಚಿದಾನಂದ ತುಂಗ, ಕೂಟಮಹಾಜಗತ್ತಿನ ಸಾಲಿಗ್ರಾಮ ಅಂಗಸAಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ,ಬೆಂಗಳೂರಿನ ನಾಗೇಂದ್ರ ಹೇರ್ಳೆ,ಅರ್ಚಕ ಮತ್ತು ಸಿಬ್ಬಂದಿ ವರ್ಗದವರು ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದು ನಿಕಟ ಭವಿಷ್ಯದಲ್ಲಿ ಸಂಪನ್ನಗೊಳ್ಳಲಿರುವ ಸಾಲಿಗ್ರಾಮ ಹಬ್ಬದ ಆಮಂತ್ರಣ ಪತ್ರಿಕೆಗಳನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಿ ಅನುಗ್ರಹವನ್ನು ಕೋರಲಾಯಿತು.

ಶಾಕಲ ಋಕ್ಸಂಹಿತಾ ಯಾಗಕ್ಕೆ ಚಾಲನೆ ಮತ್ತು ಹಬ್ಬದ ಆಮಂತ್ರಣ ಪತ್ರಿಕೆಯನ್ನು ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಬಿಡುಗಡೆಗೊಳಿಸಿದರು. ದೇವಳದ ಆಡಳಿತ ಮಂಡಳಿಯ ಪೂರ್ವ ಅಧ್ಯಕ್ಷ ಜಗದೀಶ ಕಾರಂತ, ಗ್ರಾಮ ಮೊಕ್ತೇಸರರಾದ ಕೋಡಿ ನಾಗೇಂದ್ರ ನಾವಡ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *