ಕೋಟ: ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ಸಾಲಿಗ್ರಾಮ ಇವರ ಆಶ್ರಯದಲ್ಲಿ ಗೋವಿಗಾಗಿ ಮೇವು ಕಾರ್ಯಕ್ರಮ ಮಾ.3ರಂದು ಒಂದು ಲಾರಿ ಒಣಮೇವುನ್ನು ನೀಲಾವರ ಗೋಶಾಲೆಗೆ ನೀಡುವ ಮೂಲಕ ಹಮ್ಮಿಕೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಜಿಲ್ಲಾ ಸಂಚಾಲಕರಾದ ಪ್ರಥ್ವಿರಾಜ ಶೆಟ್ಟಿ ಬಿಲ್ಲಾಡಿ ಪಾಂಚಜನ್ಯ ಸಂಘವು ನಿರಂತರವಾಗಿ ಗೋವಿಗಾಗಿ ಮೇವು ಕಾರ್ಯಕ್ರಮದಡಿ ಅನೇಕ ಗೋ ಶಾಲೆಗಳಿಗೆ ಹುಲ್ಲನ್ನು ನೀಡಿ ಗೋಮಾತೆಯ ಸೇವೆಯನ್ನು ಮಾಡುತ್ತಿದೆ, ಮಾತ್ರವಲ್ಲದೆ ಅನೇಕ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂಚೂಣಿಯಲ್ಲಿರುವ ಇವರ ಸಂಸ್ಥೆ ಇನ್ನಷ್ಟು ಯಶಸ್ವಿ ಕಾರ್ಯಕ್ರಮಗಳನ್ನು ನೀಡಲಿ ಎಂಬುದಾಗಿ ಹಾರೈಸಿದರು.
ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಮರಕಾಲ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಸುಧೀರ್ ಹೆಬ್ಬಾರ್, ಎಚ್.ಕೆ ಫ್ರೆಂಡ್ಸ್ನ ರಾಘವೇಂದ್ರ ಕುಂದರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್ಯ,ಸಂಸ್ಥೆಯ ಪ್ರಮುಖರಾದ ಗಿರಿಯ ಪೂಜಾರಿ ,ಶಿವ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು
ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ಸಾಲಿಗ್ರಾಮ ಗೋವಿಗಾಗಿ ಮೇವು ಕಾರ್ಯಕ್ರಮ ಮಾ.3ರಂದು ಒಂದು ಲಾರಿ ಒಣಮೇವುನ್ನು ನೀಲಾವರ ಗೋಶಾಲೆಗೆ ನೀಡಲಾಯಿತು. ಗೋವಿಗಾಗಿ ಮೇವು ಜಿಲ್ಲಾ ಸಂಚಾಲಕರಾದ ಪ್ರಥ್ವಿರಾಜ ಶೆಟ್ಟಿ ಬಿಲ್ಲಾಡಿ , ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಮರಕಾಲ ಮತ್ತಿತರರು ಇದ್ದರು.
ಕೋಟ.ಮಾ./3 ಪಾಂಚಜನ್ಯ