ಕೋಟ: ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಲ್ಲೆಬೆಟ್ಟು-ಐರೋಡಿ ಇದರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಇತ್ತೀಚಿಗೆ ವಿಜೃಂಭಣೆಯಿಂದ ಜರಗಿತು. ವೇ.ಮೂ ಸೂರ್ಯನಾರಾಯಣ ಬಾಯರಿ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿದವು.
ಧಾರ್ಮಿಕ ವಿಧಿವಿಧಾನದ ಭಾಗವಾಗಿ ಶ್ರೀ ದೇವರಿಗೆ ಕಲಾಶಕ್ತಿ ಹೋಮ ಮತ್ತು ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ವಾರ್ಷಿಕ ಕೆಂಡಜಾತ್ರೆ ವಿಶೇಷವಾದ ಹರಕೆಯ ಹಣ್ಣುಗೊನೆ ಸೇವೆ , ಅನ್ನಸಂತರ್ಪಣೆ ಮಹೋತ್ಸವ ಸಂಪನ್ನಗೊAಡಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಐರೋಡಿ ವಿಠಲ ಪೂಜಾರಿ, ಪ್ರಧಾನಕಾರ್ಯದರ್ಶಿ ಶಿವರಾಮ್ ಶ್ರೀಯಾನ್
ಪ್ರಧಾನ ಪಾತ್ರಿ ಮುಕ್ತೇಸರ ಕರಿಯ ಮಡಿವಾಳ , ಉಪಾಧ್ಯಕ್ಷರಾದ ಶೇಖರ್ ಮಡಿವಾಳ, ಕಿರಣ್ ಮಡಿವಾಳ, ಶ್ರೀನಿವಾಸ ಕೆಪಿಟಿಸಿಎಲ್, ಶ್ರೀನಿವಾಸ ಪೂಜಾರಿ, ಜಗನಾಥ್ ಬಂಗೇರ, ನಟರಾಜ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಐರೋಡಿ- ದೇಗುಲಗಳ ಸಂದರ್ಶನದಿAದ ಮನಶಾಂತಿ – ಡಾ.ವಿದ್ವಾನ ವಿಜಯ್ ಮಂಜರ್
ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧಾರ್ಮಿಕ ಸಭಾ ಕಾರ್ಯಕ್ರಮ
ಕೋಟ: ಧಾರ್ಮಿಕ ಕಾರ್ಯಗಳಿಂದ ದೇಗುಲಗಳ ಶಕ್ತಿ ಇಮ್ಮಡಿಯಾಗುತ್ತದೆ ಎಂದು ಯೋಗ ಗುರುಕುಲ ಪಾಂಡೇಶ್ವರ ಇದರ ನಿರ್ದೇಶಕ ವಿದ್ವಾನ್ ಡಾ. ವಿಜಯ್ ಮಂಜರ್ ಹೇಳಿದರು.
ಇತ್ತೀಚಿಗೆ ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಲ್ಲೆಬೆಟ್ಟು-ಐರೋಡಿ ಇದರ ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಮಾತನಾಡಿ ಐರೋಡಿಯ ಶ್ರೀ ಕ್ಷೇತ್ರ ವಿಶೇಷ ಸೇವೆಗಳ ಮೂಲಕ ಭಕ್ತರ ಸಂಕಷ್ಟವನ್ನು ನಿಗಿಸುವುದರ ಜತೆಗೆ ಇಷ್ಟಾರ್ಥಗಳನ್ನು ನೆರವೆರಿಸುವ ಮಹಮಾತೆಯಾಗಿದ್ದಾಳೆ, ಪ್ರತಿದಿನ ಭಕ್ತಾಧಿಗಳು ದೇಗುಲದ ಸಂದರ್ಶನದಿAದ ಧಾರ್ಮಿಕ ಚೈತನ್ಯ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್,ವಾಟರ್ ವೆಸ್ಶಿಫ್ಯಾಡ್9 ಹಂಗಾರಕಟ್ಟೆ ಇದರ ಎಂ.ಡಿ ಅನುಪ್ ಟೆಹರಾನ್ ,ಶ್ರೀ ದೇಗುಲದ ಪಾತ್ರಿಕರಿಯ ಮಡಿವಾಳ ಇವರುಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲದ ಮಾಜಿ ಟ್ರಸ್ಟಿ ಗಣೇಶ್ ಕಿಣಿ, ಯೋಗಗುರು ಸಂತೋಷ್ ಕುಮಾರ್,ಸಕಾಲಿಕ ಎಂಟರ್ ಪ್ರೆöÊಸಸ್ ಮಾಲಿಕ ಗೋಪಾಲಕೃಷ್ಣ ಉಡುಪ,ಸಮಾಜಸೇವಕ ಶಂಕರ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ದೇಗುಲದ ಅಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸಾಂಸ್ಕöÈತಿಕ ಕಾರ್ಯದರ್ಶಿ ಆನಂದರಾಮ ಗಾಣಿಗ ನಿರೂಪಿಸಿದರು ಪ್ರದಾನಕಾರ್ಯದರ್ಶಿ ಶಿವರಾಮ್ ಶ್ರೀಯಾನ್ ವಂದಿಸಿದರು.
ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಲ್ಲೆಬೆಟ್ಟು-ಐರೋಡಿ ಇದರ ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಇವರನ್ನು ಸನ್ಮಾನಿಸಲಾಯಿತು. ಶ್ರೀ ದೇಗುಲದ ಅಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲದ ಮಾಜಿ ಟ್ರಸ್ಟಿ ಗಣೇಶ್ ಕಿಣಿ, ಯೋಗಗುರು ಸಂತೋಷ್ ಕುಮಾರ್ ಮತ್ತಿತರರು ಇದ್ದರು.