• Tue. Apr 30th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟದಲ್ಲಿ ಕವಿಗೋಷ್ಠಿಯ ಮೂಲಕ ಮತದಾನದ ಜಾಗೃತಿ

ByKiran Poojary

Apr 16, 2024

ಕೋಟ: ಕೋಟದಲ್ಲಿ ವಿವೇಕ ವಿದ್ಯಾಸಂಸ್ಥೆಯಲ್ಲಿ ಕವಿಗೋಷ್ಠಿಯ ಮೂಲಕ ವಿಶಿಷ್ಠವಾಗಿ ಮತದಾನ ಜಾಗೃತಿ ಹಮ್ಮಿಕೊಂಡಿತು.

ವಿವೇಕ ಬಾಲಕಿಯರ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ಆಸರೆಯಲ್ಲಿ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ  ಚುನಾವಣಾ ಜಾಗೃತಿಗಾಗಿ ಕವಿಗೋಷ್ಠಿ ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರಾದ ಮಾನಸ, ವೈಭವಿ, ಶರ್ಮಿಳಾ ಕೆ.ಎಸ್, ಶ್ರದ್ಧಾ ,ಚೇತನ, ರಕ್ಷ ,ರಶ್ಮಿತ, ಪೃಥ್ವಿ ,ಧನ್ಯಶ್ರೀ ಜೋಗಿ ,ತಮ್ಮ ತಮ್ಮ ಕವನವನ್ನು ವಾಚಿಸಿದರು. ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಈ ವಿಭಿನ್ನ ಕವಿಗೋಷ್ಠಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ ಸಾಥ್ ನೀಡಿದರೆ, ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ವಿದ್ಯಾರ್ಥಿಗಳ ಕವಿತೆಗಳನ್ನು ವಿಶ್ಲೇಷಿಸಿ ಚುನಾವಣಾ ಮಹತ್ವವನ್ನು ಪೋಷಕರಿಗೆ ಮನದಟ್ಟಾಗುವಂತೆ ವಿದ್ಯಾರ್ಥಿಗಳಿಗೂ ಕೋರಿದರು. ವಿದ್ಯಾರ್ಥಿನಿಯರಾದ ಸಜನಿ ಸ್ವಾಗತಿಸಿದರು. ಧನ್ಯ ವಂದಿಸಿದರು .ಶ್ವೇತಾ ಮತ್ತು ಬಿಂದು ಕಾರ್ಯಕ್ರಮವನ್ನು ಸಂಘಟಿಸಿದರು.

ಕೋಟದಲ್ಲಿ ವಿವೇಕ ವಿದ್ಯಾಸಂಸ್ಥೆಯಲ್ಲಿ ಕವಿಗೋಷ್ಠಿಯ ಮೂಲಕ ವಿಶಿಷ್ಠವಾಗಿ ಮತದಾನ ಜಾಗೃತಿ ಹಮ್ಮಿಕೊಂಡಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ, ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *