ಕೋಟ; ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಭವನ ಕಚೇರಿಯಲ್ಲಿ ಚೊಂಬು ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್ ಕರ್ನಾಟಕದ ತೆರಿಗೆ ಪಾಲನ್ನು ಸರಿಯಾಗಿ ನೀಡದೆ, ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ನೆರೆ, ಬರ ಪರಿಹಾರ ಮೊತ್ತವನ್ನು ನೀಡದೆ, ಕರ್ನಾಟಕ ಸಂಗ್ರಹಿಸಿ ಕೊಟ್ಟ ತೆರಿಗೆ ಹಣವನ್ನು ಮರಳಿಸದ ಕೇಂದ್ರ ಬಿಜೆಪಿ ಸರಕಾರ ವಂಚಿಸುತ್ತಿರುವುದರ ವಿರುದ್ಧ ಉಗ್ರವಾಗಿ ಖಂಡಿಸುತ್ತದೆ.
ಕಾಂಗ್ರೆಸ್ ಆರಂಭಿಸಿರುವ ಚೊಂಬು ಚಳುವಳಿಯನ್ನು ಕೋಟ ಬ್ಲಾಕ್ ಕಾಂಗ್ರೆಸ್ ಬಲವಾಗಿ ಪ್ರತಿಭಟಿಸುತ್ತದೆ. ಕೇಂದ್ರದಿಂದ ಕರ್ನಾಟಕಕ್ಕೆ ಕನ್ನಡಿಗರಿಗೆ ದೊರಕಿರುವುದು ಕೇವಲ ಚೊಂಬು ಮಾತ್ರ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದ್ಯಸರಾದ ರವೀಂದ್ರ ಕಾಮತ್ ಗುಂಡ್ಮಿ, ಹಿಂದುಳಿದ ಘಟಕದ ಅಧ್ಯಕ್ಷ ದಿನೇಶ್ ಬಂಗೇರ ಗುಂಡ್ಮಿ, ಕಾಂಗ್ರೆಸ್ ಮುಖಂಡರಾದ ಗೋಪಾಲ ಬಂಗೇರ, ಉಮೇಶ್ ಮರಕಾಲ, ಸಂತೋಷ ಹೇರಾಡಿ, ಕರುಣಾಕರ ಪೂಜಾರಿ ಯಡ್ತಾಡಿ, ನರಸಿಂಹ ಮರಕಾಲ ಕೋಟತಟ್ಟು, ವಸಂತಿ ಹೊಸಾಳ, ಜಯಕ್ಕ ಹೊಸಾಳ, ಸುರೇಶ್ ಪೂಜಾರಿ ಯಡ್ತಾಡಿ ಉಪಸಿತರಿದ್ದರು.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಭವನ ಕಚೇರಿಯಲ್ಲಿ ಚೊಂಬು ಪ್ರತಿಭಟನೆ ನಡೆಸಿತುರೀ ವೇಳೆ ಮಾತನಾಡಿದ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್ ಮಾತನಾಡಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದ್ಯಸರಾದ ರವೀಂದ್ರ ಕಾಮತ್ ಗುಂಡ್ಮಿ, ಹಿಂದುಳಿದ ಘಟಕದ ಅಧ್ಯಕ್ಷ ದಿನೇಶ್ ಬಂಗೇರ ಗುಂಡ್ಮಿ, ಕಾಂಗ್ರೆಸ್ ಮುಖಂಡರಾದ ಗೋಪಾಲ ಬಂಗೇರ ಮತ್ತಿತರರು ಇದ್ದರು.