ಕೋಟ: ತನ್ನ ಐವತ್ತರ ಸಂಭ್ರಮದಲ್ಲಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿಯ ಸಾಲಿಗ್ರಾಮದಲ್ಲಿರುವ ಸದಾನಂದ ರಂಗಮಂಟಪದಲ್ಲಿ ಹಲವಾರು ಪ್ರಶಸ್ತಿಗೆ ಭಾಜನರಾದ ಲಾವಣ್ಯ ಬೈಂದೂರು ಇವರಿಂದ ನಾಟಕದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಮೇ.26.ರಂದು ಸಂಜೆ 6-00 ಕ್ಕೆ ಹಲವಾರು ಪ್ರದರ್ಶನ ಕಂಡಿರುವ ನಾಯಿ ಕಳೆದಿದೆ ಎಂಬ ಸಾಮಾಜಿಕ ನಾಟಕ ಪ್ರದರ್ಶಿಸಲ್ಪಡಲಿದೆಯೆಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.