ಧೈರ್ಯದಿ ದೇಶ ಕಾಯುವಾತ
ಧೈರ್ಯದಲ್ಲಿ ಗಡಿಯತ್ತ ಸಾಗಿದವ
ಬೀಸುವ ಗಾಳಿಯಲಿ ಬಾವುಟವ ಹಾರಿಸಿದವ
ಹೆತ್ತವರನ್ನು ತೊರೆದು ಹಿಮದಲ್ಲಿ ಬದುಕಿದವ
ದೇಶದ ಜನರಿಗಾಗಿ ಎದೆ ಒಡ್ಡಿದವ
ರಕ್ತದೊಡಳಿಗೆ ಬೀಳುವೆನು ಎಂದು ಬೀಗಿದವ
ಹೆತ್ತ ತಾಯಿ ಇದ್ದರೂ ಭೂತಾಯಿಯನ್ನು ಪೂಜಿಸಿದವ
ಕುಟುಂಬದವರೊಂದಿಗೆ ಜಾತಿ ಧರ್ಮವ ತೊರೆದವ
ನಮಗಾಗಿ ನಿದ್ದೆ ಬಿಟ್ಟು ಬಂದೂಕಿನ ಹಿಂದೆ ಅಲೆದಾಡಿದವ
ದೇಹ ಮನಸ್ಸು ಎಲ್ಲವೂ ದೇಶಕ್ಕಾಗಿ ಎಂದವ
ಸೇವಕನಾಗಿಯೇ ಪ್ರಾಣ ಬಿಡಬೇಕು ಎಂದು ಪಣತೊಟ್ಟವ
ತನ್ನ ದೇಹಕ್ಕಾದ ಗಾಯವ ಔಷಧವಿಲ್ಲದೆ ಗುಣವಾಗಿಸಿ ಕೊಂಡವ
ನಡೆಯುವ ಪ್ರತಿ ಹೆಜ್ಜೆಯಲ್ಲೂ ಭಾರತಾಂಬೆಯ ನೆನೆದವ
ಬೆಚ್ಚನೆಯ ಮಲಗಲು ಹೊದಿಕೆ ಇಲ್ಲದೆಯೇ ದಿನ ಕಳೆದವ
ನೇಸರನ ಉದಯದ ಮೊದಲೇ ಎಚ್ಚೆತ್ತುಕೊಂಡವ
ಕೊರೆಯುವ ಚಳಿ, ಬೀಸುವ ಗಾಳಿ, ಮಿಂಚನ್ನು ಲೆಕ್ಕಿಸದವ
ನಿತ್ಯ ಹೆತ್ತ ಕರುಳ ಕುಡಿಗೆ ನೀಡುತ್ತಾನೆ ಧೈರ್ಯವ
ಧೀರ ಎನಿಸಿಕೊಂಡ ಸೇವಕ ನಮಗೆ ಅವನೇ ಸ್ಫೂರ್ತಿದಾಯಕ ನಿಮ್ಮದಾಗಲಿ ಸಲಾಂ ಎನ್ನುವ ಕಾಯಕ.
– ಅನನ್ಯ ಎಚ್ ಸುಬ್ರಹ್ಮಣ್ಯ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಪತ್ರಿಕೋದ್ಯಮ ವಿದ್ಯಾರ್ಥಿನಿ