• Fri. May 3rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಧೈರ್ಯದಿ ದೇಶ ಕಾಯುವಾತ

ByKiran Poojary

Oct 2, 2023

ಧೈರ್ಯದಿ ದೇಶ ಕಾಯುವಾತ

ಧೈರ್ಯದಲ್ಲಿ ಗಡಿಯತ್ತ ಸಾಗಿದವ

ಬೀಸುವ ಗಾಳಿಯಲಿ ಬಾವುಟವ ಹಾರಿಸಿದವ
ಹೆತ್ತವರನ್ನು ತೊರೆದು ಹಿಮದಲ್ಲಿ ಬದುಕಿದವ
ದೇಶದ ಜನರಿಗಾಗಿ ಎದೆ ಒಡ್ಡಿದವ

ರಕ್ತದೊಡಳಿಗೆ ಬೀಳುವೆನು ಎಂದು ಬೀಗಿದವ
ಹೆತ್ತ ತಾಯಿ ಇದ್ದರೂ ಭೂತಾಯಿಯನ್ನು ಪೂಜಿಸಿದವ
ಕುಟುಂಬದವರೊಂದಿಗೆ ಜಾತಿ ಧರ್ಮವ ತೊರೆದವ
ನಮಗಾಗಿ ನಿದ್ದೆ ಬಿಟ್ಟು ಬಂದೂಕಿನ ಹಿಂದೆ ಅಲೆದಾಡಿದವ

ದೇಹ ಮನಸ್ಸು ಎಲ್ಲವೂ ದೇಶಕ್ಕಾಗಿ ಎಂದವ
ಸೇವಕನಾಗಿಯೇ ಪ್ರಾಣ ಬಿಡಬೇಕು ಎಂದು ಪಣತೊಟ್ಟವ
ತನ್ನ ದೇಹಕ್ಕಾದ ಗಾಯವ ಔಷಧವಿಲ್ಲದೆ ಗುಣವಾಗಿಸಿ ಕೊಂಡವ
ನಡೆಯುವ ಪ್ರತಿ ಹೆಜ್ಜೆಯಲ್ಲೂ ಭಾರತಾಂಬೆಯ ನೆನೆದವ

ಬೆಚ್ಚನೆಯ ಮಲಗಲು ಹೊದಿಕೆ ಇಲ್ಲದೆಯೇ ದಿನ ಕಳೆದವ
ನೇಸರನ ಉದಯದ ಮೊದಲೇ ಎಚ್ಚೆತ್ತುಕೊಂಡವ
ಕೊರೆಯುವ ಚಳಿ, ಬೀಸುವ ಗಾಳಿ, ಮಿಂಚನ್ನು ಲೆಕ್ಕಿಸದವ
ನಿತ್ಯ ಹೆತ್ತ ಕರುಳ ಕುಡಿಗೆ ನೀಡುತ್ತಾನೆ ಧೈರ್ಯವ

ಧೀರ ಎನಿಸಿಕೊಂಡ ಸೇವಕ ನಮಗೆ ಅವನೇ ಸ್ಫೂರ್ತಿದಾಯಕ ನಿಮ್ಮದಾಗಲಿ ಸಲಾಂ ಎನ್ನುವ ಕಾಯಕ.

– ಅನನ್ಯ ಎಚ್ ಸುಬ್ರಹ್ಮಣ್ಯ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಪತ್ರಿಕೋದ್ಯಮ ವಿದ್ಯಾರ್ಥಿನಿ

Leave a Reply

Your email address will not be published. Required fields are marked *