✒️ ಓಂಕಾರ ಎಸ್. ವಿ. ತಾಳಗುಪ್ಪ
ಸಾಗರ :- ಶಿವಮೊಗ್ಗ ಜಿಲ್ಲೆಯ ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿರುವ ಲಿಫ್ಟ್ ನ್ನೂ ನಿಕಟಪೂರ್ವ ಸಚಿವರಾದ ಹರತಾಳು ಹಾಲಪ್ಪ ರವರ ಸಾಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಇಚ್ಚಾಶಕ್ತಿಯಿಂದ ರೋಗಿಗಳ ಸದುಪಯೋಗಕ್ಕಾಗಿ ಸರಕಾರದ ಅನುದಾನ ಬಳಸಿ ಲಿಫ್ಟ್ ಮಂಜೂರು ಮಾಡಿಸಿ, ಆಸ್ಪತ್ರೆಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆಯೊಂದಿಗೆ ಸಾಗರ ಉಪ ವಿಭಾಗೀಯ ಆಸ್ಪತ್ರೆ ಅಭಿವೃದ್ಧಿಗೆ ಕಾರಣವಾಗಿರುವುದು ಅಷ್ಟೇ ನಗ್ನಸತ್ಯ.
ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತವೂ “ಲಿಫ್ಟ್ ” ಸೇವೆ ಸ್ಥಗಿತಗೊಳಿಸಿರುವುದೇ ದಸರಾ ಉಡುಗೊರೆಯಾಗಿರುವ ವಿರುದ್ಧ ಪ್ರಜ್ಞಾವಂತರೂ ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ