ಕೋಟ : ಭಾರತೀಯ ಪರಂಪರೆ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದ್ದು, ದೇವರ ಸ್ಪರೂಪವಾಗಿ ಗೋಮಾತೆ ಇಂದು ಜನರ ಭಾವನೆಯಲ್ಲಿ ಹಾಸುಹೊಕ್ಕಾಗಿದೆ. ಇಂತಹ ಗೋಮಾತೆಯ ಹಸಿವು ತಣಿಸುವ ಕೈಂಕಾರ್ಯ ಗೋವಿಗಾಗಿ ಮೇವು ಕಾರ್ಯಕ್ರಮ ಆಯೋಜನೆ ಶ್ಲಾಘನೀಯ, ಇಂತಹ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದ ಶ್ರೀವಿನಾಯಕ ಯುವಕ ಮಂಡಲದ ಕಾರ್ಯ ಇತರರಿಗೆ ಮಾದರಿ ಎಂದು ಗೋವಿಗಾಗಿ ಮೇವು ಕಾರ್ಯಕ್ರಮದ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಹೇಳಿದರು.
ಅವರು ಶ್ರೀವಿನಾಯಕ ಯುವಕ ಮಂಡಲ ಸಾÊಬ್ರಕಟ್ಟೆ ವತಿಯಿಂದ ನಡೆದ ಗೋವಿಗಾಗಿ ಮೇವು ಕಾರ್ಯಕ್ರಮದ ಅಂಗವಾಗಿ ನೀಲಾವರದ ಗೋಶಾಲೆ ಮೂರು ಲೋಡ್ ಹುಲ್ಲು ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಅಮೃತ್ ಪೂಜಾರಿ ಮಾತನಾಡಿ ಸಮಾಜಮುಖಿ ಚಿಂತನೆಗಳು ಯುವಕ ಮಂಡಲದ ಧ್ಯೇಯವಾಗಿರಬೇಕು ಎನ್ನುವ ಉದ್ದೇಶದಿಂದ ಗೋವಿಗಾಗಿ ಮೇವುದಂತಹ ಕಾರ್ಯಕ್ರಮಗಳು ಆಯೋಜಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಕಾರ್ಯದರ್ಶಿ ಗಿರೀಶ್ ಹಾಗೂ ಸದಸ್ಯರು, ನೀಲಾವರ ಗೋಶಾಲೆಯ ಮೇಲ್ವಿಚಾರಕ ಕಿರಣ್ ಉಪಸ್ಥಿತರಿದ್ದರು.
ಶ್ರೀವಿನಾಯಕ ಯುವಕ ಮಂಡಲ ಸಾÊಬ್ರಕಟ್ಟೆ ವತಿಯಿಂದ ನಡೆದ ಗೋವಿಗಾಗಿ ಮೇವು ಕಾರ್ಯಕ್ರಮದ ಅಂಗವಾಗಿ ನೀಲಾವರದ ಗೋಶಾಲೆ ಮೂರು ಲೋಡ್ ಹುಲ್ಲು ಹಸ್ತಾಂತಸಿರಿತು. ಯುವಕ ಮಂಡಲದ ಅಧ್ಯಕ್ಷ ಅಮೃತ್ ಪೂಜಾರಿ, ಗೋವಿಗಾಗಿ ಮೇವು ಕಾರ್ಯಕ್ರಮದ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ನೀಲಾವರ ಗೋಶಾಲೆಯ ಮೇಲ್ವಿಚಾರಕ ಕಿರಣ್ ಉಪಸ್ಥಿತರಿದ್ದರು.