• Mon. Apr 29th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಡಿ ಕನ್ಯಾಣ- ಪ್ರಗತಿ ಯುವಕ ಮಂಡಲದ ಪ್ರಗತಿ ಪಥಕ್ಕೆ ಚಾಲನೆ

ByKiran Poojary

Apr 14, 2024

ಕೋಟ: ಇಲ್ಲಿನ ಕೋಡಿ ಕನ್ಯಾಣದ ಪ್ರಗತಿ ಯುವಕ ಮಂಡಲ ಇದರ ತ್ರಿಂಶತಿ ಮಹೋತ್ಸವದ ಪ್ರಗತಿ ಪಥ ಶೀರ್ಷಿಕೆಯಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇದರ ಭಾಗವಾಗಿ  ರಾಜ್ಯಮಟ್ಟದ ಆಹ್ವಾನಿತ ಭಜನಾ ತಂಡಗಳ ಕುಣಿತ ಭಜನೆ ಸ್ಪರ್ಧೆ ಹಾಗೂ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಕೂಟ ಶನಿವಾರ ಪೂರ್ವಾಹ್ನ ಉದ್ಯಮಿ ದೇವದಾಸ್ ಸಾಲಿಯಾನ್   ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರಗತಿ ಯುವಕ ಸಂಘದ ಅಧ್ಯಕ್ಷ  ಜಗನಾಥ ಅಮೀನ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮತ್ಸೊದ್ಯಮಿ ಶಂಕರ್ ಕುಂದರ್,
ತ್ರಿಶತಿ ಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಅಮೀನ್ , ಸಮಿತಿ ಉಪಾಧ್ಯಕ್ಷರಾದ ಮುತ್ತಪ್ಪ ಸಾಲಿಯಾನ್, ಉದಯ್ ತಿಂಗಳಾಯ, ಸದಸ್ಯ ಭೋಜ ಕುಮಾರ್, ಗಿರೀಶ್ ಕುಮಾರ್, ಮೊಗವೀರ ಯುವ ಸಂಘದ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ ಉಪಸ್ಥಿತರಿದ್ದರು. ವೀಕ್ಷಕ ವಿವರಣೆಗಾರರಾಗಿ ಚಿತ್ರಪಾಡಿ ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ,ಕೋಡಿ ಶಾಲೆಯ ಶಿಕ್ಷಕ ವಿಜಯ್ ಕುಮಾರ್  ಇದ್ದರು.

ಕೋಡಿ ಕನ್ಯಾಣ- ಪ್ರಗತಿ ಯುವಕ ಮಂಡಲದ ಪ್ರಗತಿ ಪಥದ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಕೂಟಕ್ಕೆ ಪೂರ್ವಾಹ್ನ ಉದ್ಯಮಿ ದೇವದಾಸ್ ಸಾಲಿಯಾನ್   ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.ಪ್ರಗತಿ ಯುವಕ ಸಂಘದ ಅಧ್ಯಕ್ಷ  ಜಗನಾಥ ಅಮೀನ್, ಮತ್ಸ್ಯೋದ್ಯಮಿ  ಶಂಕರ್ ಕುಂದರ್, ತ್ರಿಶತಿ ಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಅಮೀನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *