• Mon. May 6th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮಣೂರು ಪಡುಕರೆ- ಎಳೆಬಿಸಿಲು ಬೆಸಿಗೆ ಶಿಬಿರ ಸಮಾರೋಪ

ByKiran Poojary

Apr 24, 2024

ಕೋಟ: ಇಲ್ಲಿನ ಮಣೂರು ಗೀತಾನಂದ ಪೌಂಡೇಶನ್ ನೇತೃತ್ವದಲ್ಲಿ ವಾಹಿನಿ ಯುವಕ ಮಂಡಲ ಪಡುಕರೆ, ಸಮುದ್ಯತಾ, ತೋಳಾರ್ ಓಷಿಯನ್ ಪ್ರಾಡೆಕ್ಟ್ ಇವರುಗಳ ಸಹಯೋಗದೊಂದಿಗೆ ಮಣೂರು ಪಡುಕರೆÀ ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಎಳೆಬಿಸಿಲು ಬೆಸಿಗೆ ಶಿಬಿರದ ಸಮಾರೋಪ ಸಮಾರಂಭವು ನೆರವೆರಿತು.
ಸಮಾರೋಪ ಕಾರ್ಯಕ್ರಮದಲ್ಲಿ ಗೀತಾನಂದ ಪೌಂಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್ ಮಾತನಾಡಿ ಮಕ್ಕಳಿಗೆ  ಬೆಸಿಗೆ ಶಿಬಿರಗಳಲ್ಲಿ ಕಲಿಸುವ ಕಲಿಕೆಯು ಬದುಕು ಕಟ್ಟಿಕೊಳ್ಳಲು ಬೇಕಾದ ಹಲವು ವಿಚಾರಗಳ ಬಗ್ಗೆ ತಿಳಿಸಿ ಕೊಡುತ್ತದೆ ಮತ್ತು ಸರಕಾರಿ ಶಾಲೆಯ ಮಕ್ಕಳಿಗೆ ಇಂತಹ ಅವಕಾಶಗಳನ್ನು ಒದಗಿಸಿ ಅವರನ್ನು ಎಲ್ಲಾ ರೀತಿಯಲ್ಲಿ ಅಣಿಗೊಳಿಸುವುದು ಅಯೋಜಕರಾದ ನಮ್ಮೆಲ್ಲರ ಕನಸು ಎಂದು ತಿಳಿಸಿದರು

ಗೀತಾನಂದದ ವಿಶ್ವಸ್ಥರಾದ ವ್ಯೆಷ್ಣವಿ ರಕ್ಷಿತ್ ಕುಂದರ್, ಮತ್ಸೊದ್ಯಮಿ ರಮೇಶ್ ಕುಂದರ್, ಸರಕಾರಿ ಸಂಯುಕ್ತ ಪ್ರೌಢಶಾಲೆಯ ಎಸ್ ಡಿ ಎಮ್ ಸಿ ಅದ್ಯಕ್ಷ ಜಯರಾಮ ಶೆಟ್ಟಿ, ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸತ್ಯನಾರಾಯಣ ಅವರು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದ ನಂತರ ಶಿಭಿರಾರ್ಥಿಗಳು ತಯಾರಿಸಿದ ಗಾಳಿಪಟವನ್ನು ತಮ್ಮ ಪೋಷಕರೊಂದಿಗೆ ಪಡುಕರೆ ಸಮುದ್ರ ತೀರದಲ್ಲಿ ಹಾರಿಸುವುದರ ಜೊತೆಗೆ  ಶಿಬಿರದ ಅಂಗವಾಗಿ ಸ್ಥಳೀಯ ಮರಳು ಶಿಲ್ಪ ಕಲಾವಿದರು ರಚಿಸಿದ ಮರಳು ಶಿಲ್ಪ ಪ್ರದರ್ಶನ ಏರ್ಪಡಿಸಲಾಗಿತ್ತು
ಶಿಬಿರದ ಸಮನ್ವಯಧಿಕಾರಿಯಾದ ರವಿಕಿರಣ್  ಜನತಾ ಸಿಬ್ಬಂದಿ ಅಶ್ವಿನಿ , ವಾಣಿಶ್ರೀ ರಾಘವೇಂದ್ರ ಮತ್ತು ಶಿಭಿರಾರ್ಥಿಗಳು ಹಾಜರಿದ್ದರು.

ಇಲ್ಲಿನ ಮಣೂರು ಗೀತಾನಂದ ಪೌಂಡೇಶನ್ ನೇತೃತ್ವದಲ್ಲಿ ಮಣೂರು ಪಡುಕರೆÀ ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಎಳೆಬಿಸಿಲು ಬೆಸಿಗೆ ಶಿಬಿರದ ಸಮಾರೋ¥ ಕಾರ್ಯಕ್ರಮ ಜರಗಿತು. ಗೀತಾನಂದ ಪೌಂಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್, ಗೀತಾನಂದದ ವಿಶ್ವಸ್ಥರಾದ ವ್ಯೆಷ್ಣವಿ ರಕ್ಷಿತ್ ಕುಂದರ್, ಮತ್ಸೊದ್ಯಮಿ ರಮೇಶ್ ಕುಂದರ್, ಸರಕಾರಿ ಸಂಯುಕ್ತ ಪ್ರೌಢಶಾಲೆಯ ಎಸ್ ಡಿ ಎಮ್ ಸಿ ಅದ್ಯಕ್ಷ ಜಯರಾಮ ಶೆಟ್ಟಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *