ಕೋಟ: ಸಾಸ್ತಾನ ಐರೋಡಿ ಗೋಳಿಬೆಟ್ಟು ನಾಗಬನದಲ್ಲಿ ಮೆಂಡನ ಮೂಲಸ್ಥಾನದ ಮುಂಡ್ಕನಬಳಿ ವಾರ್ಷಿಕ ಪೂಜೆಯು ಇತ್ತೀಚಿಗೆ ಸಂಕ್ರಾಂತಿ ದಿನದಂದು ನೆರವೇರಿತು. ಶ್ರೀಕೃಷ್ಣ ಕಟ್ಟೀನ ಮನೆ ಮತ್ತು ಅವರ ಸಹೋದರರು ಮತ್ತು ಮೂಲಸ್ಥಾನದ ಕುಟುಂಬಸ್ಥರಿಂದ ಪೂಜೆ ನೆರವೆರಿಸಿದರು.
ಮೂಲಸ್ಥಾನದ ಕುಟುಂಬದ ರಾಮಚಂದ್ರ ನಾಡಗುಡ್ಡೆಯಂಗಡಿಯವರಿಂದ ಅನ್ನದಾನ ಸೇವೆ ನಡೆಯಿತು. ಈ ವೇಳೆ ನಾಗಬನದ ಆಡಳಿತ ಮಂಡಳಿಯ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.