• Wed. May 1st, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮಣೂರು ಪಡುಕರೆ – ವಿಠೋಭಾ ಭಜನಾ ಮಂದಿರ ಇದರ ವಾರ್ಷಿಕ ವರ್ಧಂತ್ಯುತ್ಸವ, ಸನ್ಮಾನ, ಗುರುವಂದನೆ

ByKiran Poojary

Apr 18, 2024

ಕೋಟ: ವಿಠೋಭಾ ಭಜನಾ ಮಂದಿರ ಮಣೂರು ಪಡುಕರೆ ಇದರ ವಾರ್ಷಿಕ ವರ್ಧಂತ್ಯುತ್ಸವ ಕಾರ್ಯಕ್ರಮ ಎ.16ರಂದು ಸಂಪನ್ನಗೊಂಡಿತು. ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳಾದ ಕಲಾಭಿವೃದ್ಧಿ ಹೋಮ ಇನ್ನಿತರ ಕಾರ್ಯಕ್ರಮಗಳು ನರವೆರಿತು.

ಸಂಜೆ ಕೋಟತಟ್ಟು ಪಡುಕರೆಯ ಸದ್ಯೋಜಾತ ದೇಗುಲದಿಂದ ವಿಠೋಭಾ ಮಂದಿರದ ಪ್ರಭು ಶ್ರೀರಾಮಚಂದ್ರನಿಗೆ ರಜತ ಮುಖವಾಡ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು.
,ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ.ಜಯರಾಮ ಶೆಟ್ಟಿ, ನಿವೃತ್ತ. ಯೋಧರಾದ ಎಂ.ಬಿ ಶಿವಣ್ಣ,ಮಾಸ್ಟರ್ ಅಥ್ಲೆಟಿಕ್ಸ್ ಪಟು ದಿನೇಶ್ ಗಾಣಿಗ ಇವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಭಜಕರಾದ  ದಿನೇಶ್ ಎಚ್ ಸುವರ್ಣ,ಪ್ರಭಾಕರ್ ತಿಂಗಳಾಯ ಇವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಬಿಜು ನಾಯರ್,ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್,ವಿಠೋಭಾ ಭಜನಾ ಮಂದಿರದ ಅಧ್ಯಕ್ಷ ಪ್ರಭಾಕರ್ ಬಂಗೇರ,ಹಿರಿಯರಾದ ಆನಂದ ಕಾಂಚನ್, ಭುಜಂಗ ಗುರಿಕಾರ್ ಉಪಸ್ಥಿತರಿದ್ದರು. ನಂತರ ಪ್ರಸಿದ್ಧ ಗಾಯಕ ಜಗದೀಶ್ ಪುತ್ತೂರು ತಂಡದಿಂದ ಭಕ್ತಗಾನಸುಧೆ ಜರಗಿತು.

ವಿಠೋಭಾ ಭಜನಾ ಮಂದಿರ ಮಣೂರು ಪಡುಕರೆ ಇದರ ವಾರ್ಷಿಕ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ.ಜಯರಾಮ ಶೆಟ್ಟಿ ಸೇರಿದಂತೆ ವಿವಿದ ಕ್ಷೇತ್ರದ ಸಾದಕರನ್ನು ಗುರುತಿಸಲಾಯಿತು. ಉದ್ಯಮಿ ಬಿಜು ನಾಯರ್,ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *