• Thu. May 2nd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

20ರಿಂದ 25ರ ತನಕ ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ವಾರ್ಷಿಕ ಜಾತ್ರಾ ಸಡಗರ, ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ  ಪರ್ವ

ByKiran Poojary

Apr 19, 2024

ಕೋಟ: ಇಲ್ಲಿನ ಕಾರಣಿಕ ಕ್ಷೇತ್ರಗಳಲ್ಲೊಂದಾದ ಕೋಟದ ಮಣೂರಿನ ರಾಷ್ಟಿçÃಯ ಹೆದ್ದಾರಿಯ ಸನಿಹದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಇದೇ ಬರುವ ಎ.20ರಿಂದ ಮೊದಲ್ಗೊಂಡು 25ರ ತನಕ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ 21ರಿಂದ ಮಣೂರು ಶ್ರೀ ಮಹಾಲಿಂಗೇಶ್ವರ ದೇವರ ಧಾರ್ಮಿಕ ಕಾರ್ಯಕ್ರಮವು ತಂತ್ರಿಗಳಾದ ಪವಿತ್ರಪಾಣಿ  ಗಣೇಶ ಐತಾಳ,ಪಾರಂಪಳ್ಳಿ ಇವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಶ್ರೀ ರಾಮ ಪ್ರಸಾದ ಆಡಿಗ, ಗರಿಕೆಮಠ ಇವರ ಪೌರೋಹಿತ್ಯದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ನಡೆಯಲಿದ್ದು ,21ರಂದು ಪ್ರಾರ್ಥನೆ, ನಾಂದಿ ಪುಣ್ಯಾಹ, ಮುಹೂರ್ತ ಬಲಿ, ಅಂಕುರಾ ಪುಣ್ಯಾಹ, ಧ್ವಜಾಧಿವಾಸ ಹೋಮ, ಧ್ವಜಾರೋಹಣ, ವೇದಾರಂಭ ಸಂಜೆ ಬಲಿ, ವಾಸ್ತು ರಾಕ್ಷೆಘ್ನ ಹೋಮ, ರಜ್ಜು ಬಂಧನ, ಉತ್ಸವ ಬಲಿ,22ರಂದು ಪುಣ್ಯಾಹ ವಾಚನ, ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ ಸಂಜೆ ಬಲಿ, ಕಟ್ಟೆಪೂಜೆ, ಉತ್ಸವ ರಂಗಪೂಜೆ, ಉತ್ಸವ ಬಲಿ, ಕ್ಷೇತ್ರಪಾಲ ಪೂಜೆ, ಮಹಾಪೂಜೆ,23ರಂದುಪುಣ್ಯಾಹ ವಾಚನ, ಪ್ರಧಾನ ಹೋಮ, ಕಲಶಾಭಿಷೇಕ, ರಥ ಶುದ್ದಿ ಹೋಮ, ರಥ ಪೂಜೆ, ರಥಾರೋಹಣ ಬಲಿ ,ಪೂರ್ವಾಹ್ನ  11.55ಕ್ಕೆ ರಥಾರೋಹಣ ಅಪರಾಹ್ನ 12.30ಕ್ಕೆ ಮಹಾಅನ್ನಸಂತರ್ಪಣೆ, ಸಂಜೆ ರಥಯಾತ್ರೆ, ರಥಾವರೋಹಣ, ಆಲಯ ಪ್ರವೇಶ, ಮಂಗಳಾರತಿ, ಪ್ರಸಾದ ವಿತರಣೆ, ಸಂಹಾರ ಬಲಿ, ದೇವರ ಶಯನೋತ್ಸವ ವಿಶೇಷ ಆಕರ್ಷಣೆ ಕೊಂಬು ಕಹಳೆ, ಡೊಳ್ಳು ಕುಣಿತ, ಕೀಲು ಕುದುರೆ, ಚಂಡೆವಾದನ, ಬ್ಯಾಂಡ್ ಸೆಟ್. ಸಿಡಿಮದ್ದು ಪ್ರದರ್ಶನ,24ರಂದು ಪ್ರಭೋದೋತ್ಸವ, ಅಷ್ಟಾವಧಾನ ಸೇವೆ ಹೋಮ, ಕಲಶಾಭಿಷೇಕ ಪೂಜೆಗಳು ,ಸಂಜೆ ಸಂಹಾರಬಲಿ, ಚೂರ್ಣೋತ್ಸವ, ಅವಕೃತ ಪೂರ್ಣಾಹುತಿ, ಧ್ವಜಾವರೋಹಣ, ಮಹಾಮಂಗಳಾರತಿ, ಪ್ರಸಾದ ವಿತರಣೆ,25ರ ಗುರುವಾರ ಸಂಪ್ರೋಕ್ಷಣೆ ನಡೆಯಲಿದೆ.

ಸಾಂಸ್ಕೃತಿಕ  ಪರ್ವ
ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ನೇತೃತ್ವದಲ್ಲಿ  ಆಯೋಜಿಸಲಾಗುತ್ತಿದೆ.ಇದರ ಭಾಗವಾಗಿ
ಎ.20ರ  ಶನಿವಾರ
ಸಂಜೆ 5.30ಕ್ಕೆ ಸಾಂಸ್ಕöÈತಿಕ ಕಾರ್ಯಕ್ರಮಗಳ ಉದ್ಘಾಟನೆ ಶಾಸ್ತಿçÃಯ ಸಂಗೀತ – ನೃತ್ಯ ವೈಭವ, ಛಾಯ ತರಂಗಿಣಿ ಸಂಗೀತ ಶಾಲೆ, ಹರ್ತಟ್ಟು ಇವರಿಂದ, ಸಂಜೆ 6.00 ರಿಂದ ಸಾಂಸ್ಕöÈತಿಕ ಸಿಂಚನ, ಸ್ನೇಹ ಕೂಟ ಮಣೂರು ಸದಸ್ಯರಿಂದ, ಸಂಜೆ 7.00 ರಿಂದ ಯಕ್ಷಗುರು ಸೀತಾರಾಮ ಶೆಟ್ಟಿ, ಕೂಯ್ಕೂರು ಇವರಿಗೆ ಸನ್ಯಾನ  ,ನಂತರ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಮಣೂರು ಇವರಿಂದ ವೀರಮಣಿ – ಶಮಂತಕ ಮಣಿ ಯಕ್ಷ ಪ್ರದರ್ಶನ, ಎ.21ರ ಆದಿತ್ಯವಾರ ಸಂಜೆ 6.30 ಮಣೂರು ಫ್ರೆಂಡ್ಸ್ ಮಣೂರು ಇವರ ಪ್ರಸ್ತುತಿಯಲ್ಲಿ ಸ್ವರ-ನೃತ್ಯಾಂಜಲಿ’. ಸಿನೆಮಾ ನೃತ್ಯ ಮತ್ತು ರಸಮಂಜರಿ,ಸAಜೆ 7.30 ಸನ್ಮಾನ, ಪ್ರತಿಭಾ ಪುರಸ್ಕಾರ,ರಾತ್ರಿ 9.30  ಓಂಕಾರ್ ಕಲಾವಿದರು, ಕನ್ನುಕೆರೆ ಇವರಿಂದ ಹಾಸ್ಯಮಯ ನಾಟಕ ‘ವಾಚ್‌ಮ್ಯಾನ್, 22ರ ಸೋಮವಾರ ಸಂಜೆ 7.00 ರಿಂದ 10.00 ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಇಂದ್ರಪ್ರಸ್ಥ ಯಕ್ಷಗಾನ ಪ್ರದರ್ಶನ,
23 ಮಂಗಳವಾರ ಬೆಳಿಗ್ಗೆ 10.00 ರಿಂದ ಶ್ರೀ ರಾಜೇಶ್ ಭಟ್ ಮೂಡುಬಿದ್ರೆ ಇವರಿಂದ  ಭಕ್ತಿಗಾನ ಲಹರಿ’,ಸಂಜೆ 4.30 ರಿಂದ  ಶ್ರೀ ರಾಮ ಮಹಿಳಾ ಭಜನಾ ಮಂಡಳಿ, ಮಣೂರು ಇವರಿಂದ – ಭಜನಾ ಸಂಕೀರ್ತನೆ ಕಾರ್ಯಕ್ರಮಗಳು ಜರಗಲಿದೆ ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *